ಬಾರೇ ವೆಂಕಟರಮಣಿ । ಶ್ರೀ ಶ್ರೀದೇವಿ ।। ಪ ।।
ಬಾರೇ ವೆಂಕಟರಮಣಿ ಪಾರಾಯಣ ಕೇಳೆ
ಚಾರುವದನೆ ಉಪಹಾರ ಕಾಲಕೆ ನಿತ್ಯ ।। ಪ ।।
ಏನು ಪುಣ್ಯವೆ ನಂದು ಪಾರಾಯಣಿ । ನೀನೆೇ ಕೇಳುತಬಂದು ।
ಹೀನ ಮಾನವನಿಗೆ ನೀನು ಬರುವಿಯಂದು ಜ್ಞಾನವಿಲ್ಲದೆ
ಉಚ್ಛಸ್ಥಾನದೊಳಗೆ ಕೂಡೆ ।। ಪ ।।
ಸ್ವಪ್ನದೊಳಗೆ ಬರುವಿ ಶ್ರೀ ಶ್ರೀದೇವಿ । ಕ್ಷಿಪ್ರತನದಿ ಪೋಗುವಿ ।
ಸರ್ಪಶಯನ ನಮ್ಮಪ್ಪ ಗೋಕುಲ ಬಾಲ । ನಪ್ಪಿ ಕೊಂಬುವ
ಸುಖ ಒಪ್ಪಿಸು ಬೇಗನೆ ।। ಪ ।।
ಮಂಗಳಾಂಗಿಯೆ ನಿನ್ನ ಕಾಣದೆ ಬಲು । ಭಂಗಪಡುವೆನಮ್ಮ ।
ಗಂಗ ಜನಕ ಸಿರಿ ರಂಗನಂಕದಿ ಕೂತು ।
ಬೃಂಗ ಕುಂತಳೆ ಹೃದಯಾಂಗದೊಳಗಾಡೆ ।। ಪ ।।
ಎಲ್ಲ ದೇವತಗಳನು ನೀ ತಡೆದಿಹ । ಪುಲ್ಲ ವಾರಿಜನಯನೆ ।
ಗೊಲ್ಲ ಬಾಲನ ಪದ ಪಲ್ಲವ ನೋಡದೆ ನಿಲ್ಲವಲ್ಲರು
ಮನ ಸೊಲ್ಲು ಲಾಲಿಸು ಬೇಗ ।। ಪ ।।
ಇಂದಿರೇಶನ ರಾಣಿ ಎನ್ನಯಮನ ಮಂದಿರದೊಳು ಬಾ ನೀ ।
ನಂದಗೋಕುಲ ಬಾಲ ಕಂದಾರನೆತ್ತಿಕರ ತಂದು ತೋರಿಸೆ
ಅರವಿಂದ ನಯನೆ ಲಕ್ಷ್ಮಿ ।।
ಬಾರೇ ವೆಂಕಟರಮಣಿ ಪಾರಾಯಣ ಕೇಳೆ
ಚಾರುವದನೆ ಉಪಹಾರ ಕಾಲಕೆ ನಿತ್ಯ ।। ಪ ।।
ಏನು ಪುಣ್ಯವೆ ನಂದು ಪಾರಾಯಣಿ । ನೀನೆೇ ಕೇಳುತಬಂದು ।
ಹೀನ ಮಾನವನಿಗೆ ನೀನು ಬರುವಿಯಂದು ಜ್ಞಾನವಿಲ್ಲದೆ
ಉಚ್ಛಸ್ಥಾನದೊಳಗೆ ಕೂಡೆ ।। ಪ ।।
ಸ್ವಪ್ನದೊಳಗೆ ಬರುವಿ ಶ್ರೀ ಶ್ರೀದೇವಿ । ಕ್ಷಿಪ್ರತನದಿ ಪೋಗುವಿ ।
ಸರ್ಪಶಯನ ನಮ್ಮಪ್ಪ ಗೋಕುಲ ಬಾಲ । ನಪ್ಪಿ ಕೊಂಬುವ
ಸುಖ ಒಪ್ಪಿಸು ಬೇಗನೆ ।। ಪ ।।
ಮಂಗಳಾಂಗಿಯೆ ನಿನ್ನ ಕಾಣದೆ ಬಲು । ಭಂಗಪಡುವೆನಮ್ಮ ।
ಗಂಗ ಜನಕ ಸಿರಿ ರಂಗನಂಕದಿ ಕೂತು ।
ಬೃಂಗ ಕುಂತಳೆ ಹೃದಯಾಂಗದೊಳಗಾಡೆ ।। ಪ ।।
ಎಲ್ಲ ದೇವತಗಳನು ನೀ ತಡೆದಿಹ । ಪುಲ್ಲ ವಾರಿಜನಯನೆ ।
ಗೊಲ್ಲ ಬಾಲನ ಪದ ಪಲ್ಲವ ನೋಡದೆ ನಿಲ್ಲವಲ್ಲರು
ಮನ ಸೊಲ್ಲು ಲಾಲಿಸು ಬೇಗ ।। ಪ ।।
ಇಂದಿರೇಶನ ರಾಣಿ ಎನ್ನಯಮನ ಮಂದಿರದೊಳು ಬಾ ನೀ ।
ನಂದಗೋಕುಲ ಬಾಲ ಕಂದಾರನೆತ್ತಿಕರ ತಂದು ತೋರಿಸೆ
ಅರವಿಂದ ನಯನೆ ಲಕ್ಷ್ಮಿ ।।
No comments:
Post a Comment