ಅಡಿಗಳಿಗೊಂದಿಪೆ ಪುರಂದರ ಗುರುವೇ ।।
ಕಡು ಜ್ಞಾನ ಭಕ್ತಿ ವೈರಾಗ್ಯದ ನಿಧಿಯೆ ।।
ವರಮಧ್ವಮತ ಚಿರಾಂಬುದಿಗೆ ಚಂದ್ರಮನಾದೆ
ಗುರುವ್ಯಾಸರಾಯರಿಂದ ಉಪದೇಶಗೊಂಡೆ ।
ಎರಡೆರಡು ಲಕ್ಷದೆಪ್ಪತೈದು ಸಾವಿರ ।
ವರನಾಮವಳಿ ಮಾಡಿ ಹರಿಗೆ ಅರ್ಪಿಸಿದೆ ।।
ಗಂಗಾದಿ ಸಕಲ ತೀರ್ಥಂಗಳ ಚರಿಸೀ ತುರಂಗ
ವದನ ವೇದವ್ಯಾಸರ ।।
ಹಿಂಗಾದೆ ಮನದಲ್ಲಿ ನೆನೆದು ಸುಖಿಸುವ ।
ಮಂಗಳ ಮಹಿಮೆಯ ತುತಿಸಿ ತುತಿಸಿ ನಾ ।।
ನಿನಾತಿಶಯ ಗುಣ ವರ್ಣಿಸಲಳವಲ್ಲ ।
ನಿನ್ನ ಸೇವಕರ ಸೇವಕನೆಂದು ।
ಪನ್ನಂಗಶಯನ ಮುಕುಂದ ಕರುಣ।
ಪ್ರಸನ್ನ ವಿಜಯ ವಿಠ್ಠಲ ಸಂಪನ್ನ ।।
ಕಡು ಜ್ಞಾನ ಭಕ್ತಿ ವೈರಾಗ್ಯದ ನಿಧಿಯೆ ।।
ವರಮಧ್ವಮತ ಚಿರಾಂಬುದಿಗೆ ಚಂದ್ರಮನಾದೆ
ಗುರುವ್ಯಾಸರಾಯರಿಂದ ಉಪದೇಶಗೊಂಡೆ ।
ಎರಡೆರಡು ಲಕ್ಷದೆಪ್ಪತೈದು ಸಾವಿರ ।
ವರನಾಮವಳಿ ಮಾಡಿ ಹರಿಗೆ ಅರ್ಪಿಸಿದೆ ।।
ಗಂಗಾದಿ ಸಕಲ ತೀರ್ಥಂಗಳ ಚರಿಸೀ ತುರಂಗ
ವದನ ವೇದವ್ಯಾಸರ ।।
ಹಿಂಗಾದೆ ಮನದಲ್ಲಿ ನೆನೆದು ಸುಖಿಸುವ ।
ಮಂಗಳ ಮಹಿಮೆಯ ತುತಿಸಿ ತುತಿಸಿ ನಾ ।।
ನಿನಾತಿಶಯ ಗುಣ ವರ್ಣಿಸಲಳವಲ್ಲ ।
ನಿನ್ನ ಸೇವಕರ ಸೇವಕನೆಂದು ।
ಪನ್ನಂಗಶಯನ ಮುಕುಂದ ಕರುಣ।
ಪ್ರಸನ್ನ ವಿಜಯ ವಿಠ್ಠಲ ಸಂಪನ್ನ ।।
No comments:
Post a Comment