Monday, 28 October 2019

ಅಡಿಗಳಿಗೊಂದಿಪೆ ಪುರಂದರ ಗುರುವೇ

ಅಡಿಗಳಿಗೊಂದಿಪೆ ಪುರಂದರ ಗುರುವೇ ।।
ಕಡು ಜ್ಞಾನ ಭಕ್ತಿ ವೈರಾಗ್ಯದ ನಿಧಿಯೆ ।।

ವರಮಧ್ವಮತ ಚಿರಾಂಬುದಿಗೆ ಚಂದ್ರಮನಾದೆ
ಗುರುವ್ಯಾಸರಾಯರಿಂದ ಉಪದೇಶಗೊಂಡೆ ।
ಎರಡೆರಡು ಲಕ್ಷದೆಪ್ಪತೈದು ಸಾವಿರ ।
ವರನಾಮವಳಿ ಮಾಡಿ ಹರಿಗೆ ಅರ್ಪಿಸಿದೆ ।।

ಗಂಗಾದಿ ಸಕಲ ತೀರ್ಥಂಗಳ ಚರಿಸೀ ತುರಂಗ
ವದನ ವೇದವ್ಯಾಸರ ।।
ಹಿಂಗಾದೆ ಮನದಲ್ಲಿ ನೆನೆದು ಸುಖಿಸುವ ।
ಮಂಗಳ ಮಹಿಮೆಯ ತುತಿಸಿ ತುತಿಸಿ ನಾ ।।

ನಿನಾತಿಶಯ ಗುಣ ವರ್ಣಿಸಲಳವಲ್ಲ ।
ನಿನ್ನ ಸೇವಕರ ಸೇವಕನೆಂದು ।
ಪನ್ನಂಗಶಯನ ಮುಕುಂದ ಕರುಣ।
ಪ್ರಸನ್ನ ವಿಜಯ ವಿಠ್ಠಲ ಸಂಪನ್ನ ।।

No comments:

Post a Comment