ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರ ।
ಪತಿತ ಪಾವನ ಪವನ ಸುತಮಾತಾಂಬುದಿ ಚಂದ್ರ ।।
ನಂಬಿದೆನೊ ನಿನ್ನ ಚರಣಾ೦ಬುಜವ ಮನ್ಮನದ ।
ಹಂಬಲ ಪೂರೈಸೊ ಬೆಂಬಿಡದಲೇ । ಕುಂಭಿಣಿ
ಸುರರಿಪುರು೦ಬ ವಂದಿತ ಜಿತ । ಶಂಬರಾಂತಕ ಶಾಂತ
ಕುಂಭ ಕಶ್ಯಪ ತನಯ ।।
ಕ್ಷೋಣಿಯೊಳು ನೀ ಕುಂಭ ಕೋಣಕ್ಷೇತ್ರದಿ ಜನಿಸಿ ।
ವೀಣಾ ವೆಂಕಟನಾಗಿ ಜ್ಞಾನದಿಂದ । ಸಾನುರಾಗದಿ
ದ್ವಿಜನ ಪ್ರಾಣ ಉಳುಹಿದ ಮಹಿಮೆ । ಏನೆಂದು
ಬಣ್ಣಿಸಲಿ ಜ್ಞಾನಿಗಳ ಕುಲತಿಲಕ ।।
ಮಂದಮತಿಗಳ ಸಂಗದಿಂದ ನಿಮ್ಮಯ ಚರಣ ।
ಇಂದಿನ ತನಕ ನಾ ಪೊಂದ ಲಿಲ್ಲಾ । ಕುಂದು
ಎಣಿಸದೆ ಕಾಯೋ ಕಂದರ್ಪ ಪಿತ । ಶ್ಯಾಮ
ಸುಂದರದಾಸ । ಶ್ಯಾಮ ಸುಂದರದಾಸ
ಕರ್ಮಂದಿಗಳ ಕುಲವರ್ಯ ।।
ಪತಿತ ಪಾವನ ಪವನ ಸುತಮಾತಾಂಬುದಿ ಚಂದ್ರ ।।
ನಂಬಿದೆನೊ ನಿನ್ನ ಚರಣಾ೦ಬುಜವ ಮನ್ಮನದ ।
ಹಂಬಲ ಪೂರೈಸೊ ಬೆಂಬಿಡದಲೇ । ಕುಂಭಿಣಿ
ಸುರರಿಪುರು೦ಬ ವಂದಿತ ಜಿತ । ಶಂಬರಾಂತಕ ಶಾಂತ
ಕುಂಭ ಕಶ್ಯಪ ತನಯ ।।
ಕ್ಷೋಣಿಯೊಳು ನೀ ಕುಂಭ ಕೋಣಕ್ಷೇತ್ರದಿ ಜನಿಸಿ ।
ವೀಣಾ ವೆಂಕಟನಾಗಿ ಜ್ಞಾನದಿಂದ । ಸಾನುರಾಗದಿ
ದ್ವಿಜನ ಪ್ರಾಣ ಉಳುಹಿದ ಮಹಿಮೆ । ಏನೆಂದು
ಬಣ್ಣಿಸಲಿ ಜ್ಞಾನಿಗಳ ಕುಲತಿಲಕ ।।
ಮಂದಮತಿಗಳ ಸಂಗದಿಂದ ನಿಮ್ಮಯ ಚರಣ ।
ಇಂದಿನ ತನಕ ನಾ ಪೊಂದ ಲಿಲ್ಲಾ । ಕುಂದು
ಎಣಿಸದೆ ಕಾಯೋ ಕಂದರ್ಪ ಪಿತ । ಶ್ಯಾಮ
ಸುಂದರದಾಸ । ಶ್ಯಾಮ ಸುಂದರದಾಸ
ಕರ್ಮಂದಿಗಳ ಕುಲವರ್ಯ ।।
No comments:
Post a Comment