Monday, 28 October 2019

ಬಾರಯ್ಯ ಶ್ರೀನಿವಾಸ

ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆ|
ತೋರಯ್ಯ ನಿನ್ನ ಪಾದ ತೊಯ ಜಾಂಬಖನೇ ।।

ದುರುಳನ್ನ ತರಿದಂಥ ವರಚಕ್ರದಾರಿ । ಪರಮಾತ್ಮ
ಪರಬ್ರಹ್ಮ ಪರರಿಗುಪಕಾರಿ ।।

ವರಶೇಷಗಿರಿಯಲ್ಲಿ ನಿರುತ ನಿಂತಿರುವೀ ।
ಹರಿದಾಸರು ಕರೆದರೇ ಎಲ್ಲಿದ್ದರೂ ಬರುವೀ ।।

ಅನಂತನಾಭನು ನೀನೆ ಅನಂತ ಸದ್ಗುಣನೇ ।
ನೆನೆವರಿಗೊಲಿದಂತ ಪವಮಾನ ಈಶ ।।

ಅರಣ್ಯದ ಒಳಗಿದ್ದ ಕರಿರಾಜಗೊಲಿದೆ ।
ದುರುಳ ಹಿರಣ್ಯಾಕ್ಷನ ಶಿರವನ್ನೇ ತರಿದೆ ।।

ಅಜಭ ವಾಧಿಪ ನೀನು ವಿಜಯ ಸಾರಥಿಯೇ ।
ತ್ರಿಜಗ ವಂದಿತ ಈಶ ವಿಜಯ ವಿಠ್ಠಲನೆ ।।

No comments:

Post a Comment