ಸಿರಿರಮಣನ ಪ್ರಿಯೆ ಜಗನ್ಮಾತೆ ।
ಅರವಿಂದಾಲಯ ತಾಯೆ ಶರಣು ಹೊಕ್ಕೆನು ಕಾಯೇ ।।
ಕಮಲಸುಗಂಧಿಯೆ ಕಮಲಾ ನೇತ್ರೆ ।
ಕಮಲಾ ವಿಮಲಾ ಶೋಭಿತೆ ।।
ಕಮನೀಯ ಹಸ್ತಪಾದ ಕಮಲ ವಿರಾಜಿತೆ ।
ಕಮಲೇ ಕಾಯೇ ಎನ್ನೆನು ।।
ನಿನ್ನ ಕರುಣಾ ಕಟಾಕ್ಷ ವೀಕ್ಷಣ ದಿಂದಲಿ
ತನುಮನಗಳನಿತ್ತೇ ।
ಧನ್ಯ ವಿರಾಜಿತೆ ಅಜಭವಾದಿಗಳು
ಪ್ರಸನ್ನೇ ಕಾಯೆ ಎನ್ನನು ।।
ಹರಿ ನಿನ್ನ ಉದರಲಿ ಜನಿಸಿದನೆಂಬಂತ
ಗರುವದಿ ಮೆರೆಯದಿರೆ ।
ನಿರುತ ನಿನ್ನಯ ಮುದ್ದು ಪುರಂದರವಿಠ್ಠಲನ
ಚರಣ ಕಮಲವ ತೋರಿಸೆ ।।
ಅರವಿಂದಾಲಯ ತಾಯೆ ಶರಣು ಹೊಕ್ಕೆನು ಕಾಯೇ ।।
ಕಮಲಸುಗಂಧಿಯೆ ಕಮಲಾ ನೇತ್ರೆ ।
ಕಮಲಾ ವಿಮಲಾ ಶೋಭಿತೆ ।।
ಕಮನೀಯ ಹಸ್ತಪಾದ ಕಮಲ ವಿರಾಜಿತೆ ।
ಕಮಲೇ ಕಾಯೇ ಎನ್ನೆನು ।।
ನಿನ್ನ ಕರುಣಾ ಕಟಾಕ್ಷ ವೀಕ್ಷಣ ದಿಂದಲಿ
ತನುಮನಗಳನಿತ್ತೇ ।
ಧನ್ಯ ವಿರಾಜಿತೆ ಅಜಭವಾದಿಗಳು
ಪ್ರಸನ್ನೇ ಕಾಯೆ ಎನ್ನನು ।।
ಹರಿ ನಿನ್ನ ಉದರಲಿ ಜನಿಸಿದನೆಂಬಂತ
ಗರುವದಿ ಮೆರೆಯದಿರೆ ।
ನಿರುತ ನಿನ್ನಯ ಮುದ್ದು ಪುರಂದರವಿಠ್ಠಲನ
ಚರಣ ಕಮಲವ ತೋರಿಸೆ ।।
No comments:
Post a Comment