Sunday, 15 March 2020

ಬಾರೋ ಗುರು ರಾಘವೇಂದ್ರ

ಬಾರೋ ಗುರು ರಾಘವೇಂದ್ರ । ಬಾರಯ್ಯ ಬಾ ಬಾ ।।

ಹಿಂದು  ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು ।।

ಸೇವಕನೆಲೂ ನಾನು ಧಾವಿಸಿ ಬಂದೆನು ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ ಸೇವ್ಯ ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ ।।

ಕರೆದರೆ ಬರುವಿಯಂದು ಸಾರುವುದು ಡಂಗುರ ತ್ವರಿತದಿ
ಒದಗೊ ಬಂಧು । ಜರಿಯ ಬೇಡವೋ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ ।ಹರಿಯ ಸ್ಮರಣೆಯ
ನಿರುತದಾಳಿ ಏನ ಹರುಷದಲಿ ನೀ ನಿರುತ ಕೊಡುತಲಿ ।।

ನರಹರಿ ಪ್ರಿಯನೆ ಬಾರೊ । ಗುರುಶ್ರೀಶವಿಠಲನೆ 
ಕರುಣಪಾತ್ರನೇ ಬೇಗ ಬಾ ।। ಗುರುವಾರಣೆ ಪರಿಪೋಷಿಸೆನ್ನನು
ಮರೆಯದಲೆ  ತವಚರಣ ಕೋಟೆಯ । ಲಿರಿಸಿ ಚರಣಾ೦ಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ ।।



ಏನಗೂ ಆಣೆ ರಂಗ ನಿನಗೂ ಆಣೆ

ಏನಗೂ ಆಣೆ ರಂಗ ನಿನಗೂ ಆಣೆ
ಏನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ।।

ನಿನ್ನ ಬಿಟ್ಟು ಅನ್ಯರ ಭಜಿಸಿದರೆನೆಗೆ ಆಣೆ ರಂಗ ।
ಎನ್ನ ನೀ ಕೈ ಬಿಟ್ಟು ಹೋದರೆ ನಿನಗೆ ಆಣೆ ।।

ತನುಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ।।

ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ ।।

ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ।।

ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ ।।

ಪವಮಾನ ಜಗದ ಪ್ರಾಣ

ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯದಹನ (ಪವನ)
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿಕೊಡು ಕವಿಜನ ಪ್ರಿಯಾ ।।

ಹೇಮಕಚ್ಚುಟು ಉಪವೀತಧರಿಪ ಮಾರುತ । ಕಾಮಾದಿವರ್ಗ ರಹಿತ ।
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ । ರಾಮಚಂದ್ರನ ನಿಜದೂತ
ಯಾಮಯಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಡಿಪುದು ।।

ವಜ್ರಶರೀರ ಗಂಭೀರ ಮುಕುಟಧರ । ದುರ್ಜನವನ ಕುಠಾರ ।।
ನಿರ್ಜರ ಮಣಿದಯಾ ಪರಾವಾರ ಉದಾರ ।
ಸಜ್ಜನರಘಪರಿಹಾರ ಅರ್ಜುನಗೊಲಿದೊಂದು ಧ್ವಜವಾನಿಸಿನಿಂದು ।
ಮೂರ್ಜಗವರಿವಂತೆ ಗರ್ಜನೆ ಮಾಡಿದಿ ।।
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ।
ಮಾರ್ಜನದಲಿ ಭವ ವರ್ಜಿತನೆನೆಸಿತೊ ।।

ಪ್ರಾಣ ಅಪಾನ ವ್ಯಾನೋದಾನ ಸಮಾನ । ಆನಂದ ಭಾರತೀರಮಣ ।।
ನೀನೇ ಸರ್ವಾದಿ ಗೀರ್ವಾಣದ್ಯರಿಗೆ ಜ್ಞಾನಧನಪಾಲಿಪವರೇಣ್ಯ ।
ನಾನು ನಿರುತದಲ್ಲಿ ಏನೆೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನು
ಪ್ರಾಣನಾಥ ಸಿರಿವಿಜಯವಿಠ್ಠಲನ ।। ಕಾಣಿಸಿ ಕೊಡುವುದು ಭಾನುಪ್ರಕಾಶ ।।





ಏನು ಧನ್ಯಳೋ ಲಕುಮಿ

ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು ।।

ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ್ನ ಸೇವೆ
ಸಾಟಿಯಿಲ್ಲದೆ ಪೂರ್ಣಗುಣಳು ಶ್ರೇಷ್ಠಳಾಗಿ ಮಾಡುತಿಹಳು ।।

ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲಿ ನಿಂತು
ಚಿತ್ರ ಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು ।।

ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷ ರಹಿತನಾದ
ಗರುಡಗಮನನಾದ ಪುರಂದರ ವಿಠ್ಠಲನ್ನ ಸೇವಿಸುವಳು ।।

ಮೂರು ಜಗವ ಕುಣಿಸಿದಂತ

ಮೂರು ಜಗವ ಕುಣಿಸಿದಂತ ಗಾರುಡಿಗೈವ  ಯಾರಕ್ಕ ।।
ಯಾರಕ್ಕ ಇವ ಯಾರಕ್ಕ ।।

ನಾರಾಯಣನಲ್ಲವೇನು ಅಣ್ಣಾ ಕೇಳೆ ತಮ್ಮ ।

ಧರೆಯ ಸುರುಳಿ ಸುತ್ತಿದಂಥ ಅರಸು ಇವ ಯಾರಕ್ಕ ।
ಮಧುರಾ ಪುರದಿ ಕದನವ ನಿಟ್ಟಿದಾ
ವರಹಾವತಾರ ಕೇಳ್ ತಂಗಿ (ಇವ) ।।

ಕುದುರೆಯ ಮೇಲೆ ಎದುರಿಗೆ ಬರುವ
ಚೆಲುವಾ ಇವ ಯಾರಕ್ಕ ಇವ ಯಾರಕ್ಕ ।।
ಅರಿಯದ ಭಕುತರ ಮೊರೆಯನೆ ಕೇಳ್ದ
ಕಲ್ಕ್ಯಾವತಾರ ಕೇಳ್ ತಂಗಿ (ಇವ) ।।

ಇಂದು ವದನ ಸುಂದರ ಮೂರುತಿ
ಗೋವಿಂದ ಇವ ಕಾಣಕ್ಕ ।।
ನಂದನ ಕಂದ ಹೆಳವನ ಕಟ್ಟೆಯ
ರಂಗ ಇವ ಕಾಣಕ್ಕ
ಹೆಳವನ ಕಟ್ಟೆಯ ರಂಗ ಕಾಣಕ್ಕ ।।



ಪಾಲಿಸೆ ಎನ್ನನು ಗೌರಿ

ಪಾಲಿಸೆ ಎನ್ನನು ಗೌರಿ ।।
ಪಾಲಿಸೆ ನಿನ್ನಯ ಪಾಲಿಗೆ ಬಂದೆನು
ಬೀಳುವೆ ಸರ್ವದ ಕಾಲಿಗೆ ಕರುಣದಿ

ಶರಣೆಂದವರನು ಪೊರೆವಳುಯೆ೦ಬುವ
ಬಿರುದು ನಿನ್ನದು ಎಂದು ಅರಿತೆನು ಕರುಣದಿ ।।

ಸನ್ಮತ ಪುರುಷನ ಇನ್ನೆಲಿ ಕಾಣೆನು
ಮನ್ಮಥನೆಂಬುವ ಬನ್ನ ಬಡಿಪ ಬಲು ।।

ಕಾಣೆನು ಶಾಂತಿಯ ಏನೆಂದು ಹೇಳಲಿ
ಪ್ರಾಣೀಶ ವಿಠ್ಠಲನು ತಾನೆ ಬಲ್ಲನು ತಾಯೆ ।।

ಹೂವ ತರುವರ ಮನೆಗೆ ಹುಲ್ಲ ತರುವ

ಹೂವ ತರುವರ ಮನೆಗೆ ಹುಲ್ಲ ತರುವ
ಆವಾ ಲಕುಮಿರಮಣ ಇವಗಿಲ್ಲ ಗರುವ

ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವು
ಇಂದಿರಾರಮನಿಗೆ ಅರ್ಪಿತವೆನ್ನಲು ।
ಒಂದೇ ಮನಸಿನಿಂದ ಸಿಂಧುಶಯನಾಯನೇ
ಎಂದೆಂದಿಗು ವಾಸಿಪನು ಎನ್ಮ೦ದಿರದೊಳು ।।

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ ।
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ
ಸರಿಭಾಗ ಕೊಡುವ ತನ್ನರಮನೆಯೊಳಗೆ ।।

ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲ ತಿನಿಸಿದ ।
ಅಂಡಜಾಧಿಪ ನಮ್ಮ ಪುರಂದರವಿಠಲನು
ತೊಂಡರಿಗೆ ತೊಂಡರಾಗಿ ಸಂಚರಿಸುವವ ।।

ನಾರಸಿಂಹನೆಂಬೋ ದೇವನು

ನಾರಸಿಂಹನೆಂಬೋ ದೇವನು ನಂಬಿದಂಥ 
ನರರಿಗೆಲ್ಲ ವರವ ಕೊಡುವನು 

ಓಂ ನಮಃ ಶಿವಾಯ ಎನುತಲಿ 
ಅಸುರ ತನ್ನ ಸುತನ ಕರೆದು ತೋರಿಸೆಂದನು 
ನರಹರಿಯ ನಾಮವನ್ನು ನಸುನಗುತಲೆ ಬರೆಯುತಿರಲು 
ಎಡೆದ ತೊಡೆಯಲಿದ್ದ ಶಿಶುವ ಧರೆಗೆ ಬಡಿದು ನೂಕಿದಾನು 

ಅಂಬುಧಿಯೋಳ್ ಮಗನ ಮಲಗಿಸಿ ಮೇಲೆ ದೊಡ್ಡ 
ಬೆಟ್ಟವನ್ನು ಇತ್ತು ಬನ್ನಿರೋ 
ಹರಿಯ ಕೃಪೆಗೆ ಪಾತ್ರನಾದ ತರುಣನೆಂದು ವರುಣದೇವ 
ಮರಣವಿಲ್ಲದ್ಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿದಾನೋ 

ಸುತ್ತು ಜನರನೆಲ್ಲಾ ಕರೆಸಿದಾ ಅಸುರ ತನ್ನ 
ಸುತನ ಕೊಳಿಸಬೇಕು ಎನುತಲಿ 
ಅಟ್ಟಡಿಗೆಯಲ್ಲಿ ವಿಷವ ಅಷ್ಟು ಭೋಜನಂಗಳ ಮಾಡಿ 
ಅಷ್ಟು ವಿಷದ ಪದಾರ್ಥಗಳನ್ನು ಭುಂಜಿಸಿ ಕುಳಿತ ಗಟ್ಟಿಯಾಗಿ 

ಬೆಟ್ಟವನ್ನು ಹತ್ತಿ ಉರುಳಿಸಿ ಅಸುರ ತನ್ನ 
ಪಟ್ಟದಾನೆ ಕೈಲಿ ಮೆಟ್ಟಿಸಿ 
ಹರಳುಮನೆಯ ಮಾಡಿ ಸುಟ್ಟು ಹುಲಿಯ ಬೋನಿನೊಳಗೆ ಇಟ್ಟು 
ಯತನವಿಲ್ಲದೆ ಸುತನ ಕೊಳಿಸ ಶಕ್ತನಿಲ್ಲದೆ ಪೋದ 

ನಿನ್ನ ಹರಿಯು ಇದ್ದ ಎಡೆಯಲಿ ಅಸುರ ತನ್ನ ಸುತನ 
ಕರೆದು ತೋರಿಸೆಂದನು 
ಎನ್ನ ಹರಿಯು ಇಲ್ಲದೆಡೆಯು ಇರುವುದುಂಟೆ ಲೋಕದಲ್ಲಿ 
ಈ ಕಂಭದಲ್ಲಿ ಇಹನು ಎಂದು ಕೈಯ ಮುಗಿದು ತೋರಿದಾನು 

ವಜ್ರ ಕಂಭವನ್ನು ಒದೆಯಲು ಹರಿಯು ತನ್ನ 
ಉಗ್ರಕೋಪವನ್ನು ತಾಳಿದ 
ಕಟಕಟೆಯ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ 
ಕರಳು ಮಾಲೆಯನ್ನು ತೆಗೆದು ಕೊರಳು ಮಾಲೆ ಹಾಕಿದಾನು 

ಅಂತರಿಕ್ಷದಲ್ಲಿ ಅಮರರು ನೋಡಿ ಆಗ 
ಪುಷ್ಪವೃಷ್ಟಿಯನ್ನೆ ಕರೆದರು 
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತುಕೊಂಡು 
ಅಮರಪತಿಯರೆಲ್ಲ ಕೂಡಿ ಅಂಜಬೇಡಿದರೆಂಭಯವಿತ್ತು 

ಲಕ್ಷ್ಮೀನಾರಸಿಂಹ ಚರಿತ್ರೆಯಾ ಸ್ತುತಿಸಿದ  ಹೇಳಿಕೇಳಿದ ಮನುಜರಿಗೆ 
ಅಷ್ಟ ಭಾಗ್ಯಗಳನ್ನು ಕೊಟ್ಟು ಪುತ್ರಸಂತಾನ 
ಭಕ್ತಿಯಿಂದಲೆ ಮುಕ್ತಿ ಕೊಡುವ 
ಭಕ್ತವತ್ಸಲ ಪುರಂದರವಿಠ್ಠಲ