ಬಾರೋ ಗುರು ರಾಘವೇಂದ್ರ । ಬಾರಯ್ಯ ಬಾ ಬಾ ।।
ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು ।।
ಸೇವಕನೆಲೂ ನಾನು ಧಾವಿಸಿ ಬಂದೆನು ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ ಸೇವ್ಯ ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ ।।
ಕರೆದರೆ ಬರುವಿಯಂದು ಸಾರುವುದು ಡಂಗುರ ತ್ವರಿತದಿ
ಒದಗೊ ಬಂಧು । ಜರಿಯ ಬೇಡವೋ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ ।ಹರಿಯ ಸ್ಮರಣೆಯ
ನಿರುತದಾಳಿ ಏನ ಹರುಷದಲಿ ನೀ ನಿರುತ ಕೊಡುತಲಿ ।।
ನರಹರಿ ಪ್ರಿಯನೆ ಬಾರೊ । ಗುರುಶ್ರೀಶವಿಠಲನೆ
ಕರುಣಪಾತ್ರನೇ ಬೇಗ ಬಾ ।। ಗುರುವಾರಣೆ ಪರಿಪೋಷಿಸೆನ್ನನು
ಮರೆಯದಲೆ ತವಚರಣ ಕೋಟೆಯ । ಲಿರಿಸಿ ಚರಣಾ೦ಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ ।।
ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು ।।
ಸೇವಕನೆಲೂ ನಾನು ಧಾವಿಸಿ ಬಂದೆನು ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ ಸೇವ್ಯ ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ ।।
ಕರೆದರೆ ಬರುವಿಯಂದು ಸಾರುವುದು ಡಂಗುರ ತ್ವರಿತದಿ
ಒದಗೊ ಬಂಧು । ಜರಿಯ ಬೇಡವೋ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ ।ಹರಿಯ ಸ್ಮರಣೆಯ
ನಿರುತದಾಳಿ ಏನ ಹರುಷದಲಿ ನೀ ನಿರುತ ಕೊಡುತಲಿ ।।
ನರಹರಿ ಪ್ರಿಯನೆ ಬಾರೊ । ಗುರುಶ್ರೀಶವಿಠಲನೆ
ಕರುಣಪಾತ್ರನೇ ಬೇಗ ಬಾ ।। ಗುರುವಾರಣೆ ಪರಿಪೋಷಿಸೆನ್ನನು
ಮರೆಯದಲೆ ತವಚರಣ ಕೋಟೆಯ । ಲಿರಿಸಿ ಚರಣಾ೦ಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ ।।
No comments:
Post a Comment