ಹೂವ ತರುವರ ಮನೆಗೆ ಹುಲ್ಲ ತರುವ
ಆವಾ ಲಕುಮಿರಮಣ ಇವಗಿಲ್ಲ ಗರುವ
ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವು
ಇಂದಿರಾರಮನಿಗೆ ಅರ್ಪಿತವೆನ್ನಲು ।
ಒಂದೇ ಮನಸಿನಿಂದ ಸಿಂಧುಶಯನಾಯನೇ
ಎಂದೆಂದಿಗು ವಾಸಿಪನು ಎನ್ಮ೦ದಿರದೊಳು ।।
ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ ।
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ
ಸರಿಭಾಗ ಕೊಡುವ ತನ್ನರಮನೆಯೊಳಗೆ ।।
ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲ ತಿನಿಸಿದ ।
ಅಂಡಜಾಧಿಪ ನಮ್ಮ ಪುರಂದರವಿಠಲನು
ತೊಂಡರಿಗೆ ತೊಂಡರಾಗಿ ಸಂಚರಿಸುವವ ।।
ಆವಾ ಲಕುಮಿರಮಣ ಇವಗಿಲ್ಲ ಗರುವ
ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವು
ಇಂದಿರಾರಮನಿಗೆ ಅರ್ಪಿತವೆನ್ನಲು ।
ಒಂದೇ ಮನಸಿನಿಂದ ಸಿಂಧುಶಯನಾಯನೇ
ಎಂದೆಂದಿಗು ವಾಸಿಪನು ಎನ್ಮ೦ದಿರದೊಳು ।।
ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ ।
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ
ಸರಿಭಾಗ ಕೊಡುವ ತನ್ನರಮನೆಯೊಳಗೆ ।।
ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲ ತಿನಿಸಿದ ।
ಅಂಡಜಾಧಿಪ ನಮ್ಮ ಪುರಂದರವಿಠಲನು
ತೊಂಡರಿಗೆ ತೊಂಡರಾಗಿ ಸಂಚರಿಸುವವ ।।
No comments:
Post a Comment