Sunday, 15 March 2020

ಹೂವ ತರುವರ ಮನೆಗೆ ಹುಲ್ಲ ತರುವ

ಹೂವ ತರುವರ ಮನೆಗೆ ಹುಲ್ಲ ತರುವ
ಆವಾ ಲಕುಮಿರಮಣ ಇವಗಿಲ್ಲ ಗರುವ

ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವು
ಇಂದಿರಾರಮನಿಗೆ ಅರ್ಪಿತವೆನ್ನಲು ।
ಒಂದೇ ಮನಸಿನಿಂದ ಸಿಂಧುಶಯನಾಯನೇ
ಎಂದೆಂದಿಗು ವಾಸಿಪನು ಎನ್ಮ೦ದಿರದೊಳು ।।

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ ।
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ
ಸರಿಭಾಗ ಕೊಡುವ ತನ್ನರಮನೆಯೊಳಗೆ ।।

ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲ ತಿನಿಸಿದ ।
ಅಂಡಜಾಧಿಪ ನಮ್ಮ ಪುರಂದರವಿಠಲನು
ತೊಂಡರಿಗೆ ತೊಂಡರಾಗಿ ಸಂಚರಿಸುವವ ।।

No comments:

Post a Comment