Saturday, 8 August 2020

ಪೋಪು ಹೋಗೋಣ ಬಾ

 ಪೋಪು ಹೋಗೋಣ ಬಾ ರಂಗಯ್ಯ ರಂಗ 

 ಪೋಪು ಹೋಗೋಣ ಬಾ ।।


ಜಾನ್ಹವಿಯ ತೀರವಂತೆ ಜನಕರಾಯನ ಕುವರಿಯಂತೆ 

ಜಾನಕಿ ವಿವಾಹವಂತೆ ಜಾಣ ನೀನು ಬರಬೇಕಂತೆ ।।


ಕುಂಡನೀಯ ನಗರವಂತೆ ಭೀಷ್ಮಕರಾಯನ ಕುವರಿಯಂತೆ 

ಶಿಶುಪಾಲ ನೊಲ್ಲಳಂತೆ ನಿನಗೆ ಓಲೆ ಬರೆದಳಂತೆ ।।


ಕೌರವರು ಪಾಂಡವರು ನೆತ್ತವಾಡಿ ಸೋತರಂತೆ 

ರಾಜ್ಯವನ್ನೆ ಬಿಟ್ಟರಂತೆ ರಂಗವಿಠಲ ಬರಬೇಕಂತೆ ।।


ಸತ್ಯ ಜಗತಿದು ಪಂಚಭೇದವು

 ಸತ್ಯ ಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ 

ಕೃತ್ಯವರಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ।।

 

ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು 

ಜೀವ ಜಡ ಜಡ ಜಡಕೆ ಭೇದ ಜೀವ ಜಡ ಪರಮಾತ್ಮಗೆ ।।

 

ಮಾನುಷೋತ್ತಮಗಧಿಪ ಕ್ಷಿತಿಪರು ಮನುಜ ದೇವ ಗಂಧರ್ವರು 

ಜ್ಞಾನಪಿತ್ರಜಾನ ಕರ್ಮಜ ದಾನವಾರಿ ತತ್ವಾತ್ಮರು ।।

 

ಗಣಪಮಿತ್ರರು ಸಪ್ತಋಷಿಗಳು ವಹ್ನಿ ನಾರದ ವರುಣನು 

ಇನಜಗೆ ಸಮ ಸೂರ್ಯ ಚಂದ್ರರು ಮನುಸುತೆಯು ಹೆಚ್ಚು ಪ್ರವಹನು ।।

 

ದಕ್ಷ ಸಮ ಅನಿರುದ್ಧ ಗುರು ಶಚಿ ರತಿಸ್ವಯಾ೦ಭುವರಾರ್ವರು 

ಪಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು ।।

 

ದೇವೇಂದ್ರನಿಗಿಂತ ಅಧಿಕ ಮಹರುದ್ರ ದೇವ ಸಮ ಶೇಷ ಗರುಡರು 

ಕೇವಲಧಿಕರು ಶೇಷಗರುಡಗೆ ದೇವಿ ಭಾರತಿ ಸರಸ್ವತಿ ।।

 

ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು 

ವಾಯು ಬ್ರಹ್ಮಗೆ ಕೋಟಿ ಗುಣದಿಂದ ಅಧಿಕಶಕ್ತಳು ಶ್ರೀ ರಮಾ ।।

 

ಅನಂತ ಗುಣದಿ೦ ಲಕುಮಿಗಧಿಕನು ಶ್ರೀಪುರಂದರವಿಠಲನು 

ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ ।।

 

  

ಆರುತಿ ಬೆಳಗೋಣ ಬಾರೇ

ಆರುತಿ ಬೆಳಗೋಣ ಬಾರೇ ಶ್ರೀಹರಿಗೆ ॥

ಆರುತಿ ಬೆಳಗೋಣ ವಾರಿಜ ನಾಭಗೇ

ನಾರಿಯರೆಲ್ಲರೂ ತೀವ್ರದಿ೦ದಲಿ । ಮುತ್ತಿನಾರುತಿ 

ಬೆಳಗೋಣ ಬಾರೇ ॥


ಮತ್ಸ್ಯ ಕೂರ್ಮನಿಗೆ ಸ್ವಚ್ಛವರಹನಿಗೆ ॥

ವತ್ಸ ಪ್ರಹ್ಲಾದನ ಸಲಹಿದ ನರಹರಿಗೆ ॥

 

ಪುಟ್ಟವಾಮನನಿಗೆ ದಿಟ್ಟ ಭಾರ್ಗವನಿಗೆ 

ಶಿಲೆಯನುದ್ಧರಿಸಿದ  ಶ್ರೀ ರಾಮಚ೦ದ್ರಗೇ ॥


ಉಧ್ಭವ ಸಖನಿಗೆ ಮುದ್ದು ಕೃಷ್ಣನಿಗೆ ॥

ಬೌದ್ಧಾವತಾರ ತಾಳ್ದ ಮುದ್ದು ಹಯವದನಗೆ ॥