Saturday, 27 June 2020

ಬೃಂದಾವನದಿ ಕೊಳಲನೂದಲಿಲ್ಲವೇ

ಬೃಂದಾವನದಿ ಕೊಳಲನೂದಲಿಲ್ಲವೇ 
ಅಂದು ಗೋಪಿಯರನ್ನು ಕರೆಯಲಿಲ್ಲವೆ ।।
ಇಂದೇಕೆ ಮರೆತೆಯೋ ಮಾಧವ ರಾಧಮಾಧವ ವೇಣಿ ಮಾಧವ 
ಬಂದು ನೀ ಎನ್ನ ಕಾಯೋ ಕೇಶವ ।।

ನೀರೊಳು ನೀ ಆಟವಾಡಲಿಲ್ಲವೇ 
(ನೀ) ಭಾರವ ಬೆನ್ನೊಳು ಹೊರಲಿಲ್ಲವೇ ।
ಕೊರೆಯುತ ಮಸೆಯುತ ತಿರುಗಲಿಲ್ಲವೇ 
(ನೀ) ಪೋರನ ಮಾತಿಗೆ ಪೊಗಲಿಲ್ಲವೇ (ಕೃಷ್ಣ) ।।

ಪೊಡವೀಯ ದಾನವ ಬೇಡಲಿಲ್ಲವೇ 
(ನೀ) ಬಡವ ಬ್ರಾಹ್ಮಣನಾಗಿ ತಿರುಗಲಿಲ್ಲವೇ ।
ಮಡದೀಯ ಕಟ್ಟಿಕೊಂಡು ಹೋಗಲಿಲ್ಲವೇ 
(ನೀ) ಕಡಗೋಲ ಕೈಯಲ್ಲಿ ಪಿಡಿಯಲಿಲ್ಲವೇ (ಕೃಷ್ಣ)।।

ಬತ್ತಲೆ ಬೌದನಾಗಿ ತಿರುಗಲಿಲ್ಲವೇ
(ನೀ) ಉತ್ತಮ ತೇಜಿಯನ್ನೇರಲಿಲ್ಲವೇ ।
ಹತ್ತಾವತಾರವ ತೋರಲಿಲ್ಲವೇ 
ಮತ್ತೆ ಶ್ರೀ ಪುರಂದರ ವಿಠ್ಠಲನಲ್ಲವೆ (ಕೃಷ್ಣ) ।।


ನಿನ್ನ ನಂಬಿ ಬಂದೆ

ನಿನ್ನ ನಂಬಿ ಬಂದೆ ಎನ್ನ ಕೈಬಿಡಬೇಡ ಘನ್ನ 
ಮಹಿಮನೆ ಶ್ರೀನಿವಾಸ ।।

ಪನ್ನಗ ಶಯನ ಪನ್ನ ರಕ್ಷಕ । ಪ್ರಸನ್ನನಾಗೋ 
ಬೇಗ ಶ್ರೀನಿವಾಸ ।।

ಜನನಿ ಜನಕನೆ ಶ್ರೀನಿವಾಸ । ಎನ್ನನುಭಂದಿಯು 
ನೀನೇ ಶ್ರೀನಿವಾಸ ।।
ಜನುಮಜನುಮದೊಳು ಶ್ರೀನಿವಾಸ 
ಎನ್ನನುದ್ಧರಿಸುವವನೇ ಶ್ರೀನಿವಾಸ ।।

ದೇಶದೇಶವತಿರುಗಿ ಶ್ರೀನಿವಾಸ ಬಹು 
ಕ್ಲೇಶ ಪಟ್ಟಿರುವೆನು ಶ್ರೀನಿವಾಸ ।।
ಆಶಾ ಪಾಶವ ಬಿಡಿಸೋ ಶ್ರೀನಿವಾಸ 
ನಿನ್ನದಾಸರ ಸಂಗಕೊಡೋ ಶ್ರೀನಿವಾಸ ।।

ಬಂಧನವ ಕೊಡುವವನೆ ಶ್ರೀನಿವಾಸ 
ಭವ ಬಂಧನವ ಬಿಡಿಸುವವನೆ ಶ್ರೀನಿವಾಸ ।।
ಅಂದು ನೀನೆ ಇಂದು ನೀನೆ ಶ್ರೀನಿವಾಸ 
ಎಂದೆಂದೆಂದಿಗೂ ನೀನೆ ಶ್ರೀನಿವಾಸ ।।

ಹೃದಯದಲ್ಲಿ ನಿನ್ನ ರೂಪ ಶ್ರೀನಿವಾಸ 
ಎನ್ನ ವದನದಲ್ಲಿ ನಿನ್ನ ನಾಮ ಶ್ರೀನಿವಾಸ ।।
ಸದಯನಾಗಿ ಎನಗೆ ಒಲಿದು ಶ್ರೀನಿವಾಸ 
ನೀನು ಒದಗಿ ಬಂದು ಪಾಲಿಸಯ್ಯ ಶ್ರೀನಿವಾಸ ।।

ಜಲ್ಲಡಿಯ ನೆರಳಿನಂತೆ ಶ್ರೀನಿವಾಸ 
ಬಹು ತಲ್ಲಣವಗೊಳಿಸುವವನೆ ಶ್ರೀನಿವಾಸ ।।
ಬಲ್ಲವರು ಯಾರಯ್ಯ ಶ್ರೀನಿವಾಸ 
ಸಿರಿವಲ್ಲಭನೆ ಎನ್ನ ತಂದೆ ವೆಂಕಟೇಶ ।।


Friday, 26 June 2020

ಗೋಪಿ ಕೇಳ್ ನಿನ್ನ ಮಗ

ಗೋಪಿ ಕೇಳ್ ನಿನ್ನ ಮಗ ಜಾರ ಅವ  ಚೋರ ಸುಕುಮಾರ ।

ಮುದದಿ ಮುಕುಂದ ಸದಸದನಕ್ಕೆ ಬಂದ ದಧಿಯ
ಮೀಸಲು ತಿಂದ ಅವತಿಂದ ನಿನ್ನ ಕಂದಾ ।।

ಮಾರನ ಪಿತ ತಾ ಮನೆಯೊಳು ಹೊಕ್ಕ ಹಿಡಿಯ |
ಹೋದರೆ ಆವ ಸಿಕ್ಕ ಅವನಕ್ಕ ಭಾರಿ ಠಕ್ಕ ।।

ಹರೆಯದ ಪೋರಿ ಜರದ ಕೆಂಗೋರಿ । ಭರದಿಂದ 
ಸೀರೆಯ ಸೆಳೆದ ಕರಪಿಡಿದ ಮಾನ ಕಳೆದಾ ।।

ಭಾಳದಿನವಾಯಿತು ಹೇಳುವುದ್ಹಾ೦ಗೆ । ಗೋಪಾಲನ 
ಮನಸು ಒಮ್ಮೆ ಹಾಂಗೆ ಒಮ್ಮೆ ಹಿಂಗೆ । ಹೇಳಲಾಹ್೦ಗೆ ।।

ರಾಧೆಯ ಮನದ ಮೋದ ಮುಕುಂದ । ಶ್ರೀದವಿಠ್ಠಲನಾಟ 
ಚೆಂದ ನಯನನಂದ ನಿನ್ನ ಕಂದಾ ।।