ಅಂದು ಗೋಪಿಯರನ್ನು ಕರೆಯಲಿಲ್ಲವೆ ।।
ಇಂದೇಕೆ ಮರೆತೆಯೋ ಮಾಧವ ರಾಧಮಾಧವ ವೇಣಿ ಮಾಧವ
ಬಂದು ನೀ ಎನ್ನ ಕಾಯೋ ಕೇಶವ ।।
ನೀರೊಳು ನೀ ಆಟವಾಡಲಿಲ್ಲವೇ
(ನೀ) ಭಾರವ ಬೆನ್ನೊಳು ಹೊರಲಿಲ್ಲವೇ ।
ಕೊರೆಯುತ ಮಸೆಯುತ ತಿರುಗಲಿಲ್ಲವೇ
(ನೀ) ಪೋರನ ಮಾತಿಗೆ ಪೊಗಲಿಲ್ಲವೇ (ಕೃಷ್ಣ) ।।
ಪೊಡವೀಯ ದಾನವ ಬೇಡಲಿಲ್ಲವೇ
(ನೀ) ಬಡವ ಬ್ರಾಹ್ಮಣನಾಗಿ ತಿರುಗಲಿಲ್ಲವೇ ।
ಮಡದೀಯ ಕಟ್ಟಿಕೊಂಡು ಹೋಗಲಿಲ್ಲವೇ
(ನೀ) ಕಡಗೋಲ ಕೈಯಲ್ಲಿ ಪಿಡಿಯಲಿಲ್ಲವೇ (ಕೃಷ್ಣ)।।
ಬತ್ತಲೆ ಬೌದನಾಗಿ ತಿರುಗಲಿಲ್ಲವೇ
(ನೀ) ಉತ್ತಮ ತೇಜಿಯನ್ನೇರಲಿಲ್ಲವೇ ।
ಹತ್ತಾವತಾರವ ತೋರಲಿಲ್ಲವೇ
ಮತ್ತೆ ಶ್ರೀ ಪುರಂದರ ವಿಠ್ಠಲನಲ್ಲವೆ (ಕೃಷ್ಣ) ।।
No comments:
Post a Comment