ನಾರಸಿಂಹನೆಂಬೋ ದೇವನು ನಂಬಿದಂಥ
ನರರಿಗೆಲ್ಲ ವರವ ಕೊಡುವನು
ಓಂ ನಮಃ ಶಿವಾಯ ಎನುತಲಿ
ಅಸುರ ತನ್ನ ಸುತನ ಕರೆದು ತೋರಿಸೆಂದನು
ನರಹರಿಯ ನಾಮವನ್ನು ನಸುನಗುತಲೆ ಬರೆಯುತಿರಲು
ಎಡೆದ ತೊಡೆಯಲಿದ್ದ ಶಿಶುವ ಧರೆಗೆ ಬಡಿದು ನೂಕಿದಾನು
ಅಂಬುಧಿಯೋಳ್ ಮಗನ ಮಲಗಿಸಿ ಮೇಲೆ ದೊಡ್ಡ
ಬೆಟ್ಟವನ್ನು ಇತ್ತು ಬನ್ನಿರೋ
ಹರಿಯ ಕೃಪೆಗೆ ಪಾತ್ರನಾದ ತರುಣನೆಂದು ವರುಣದೇವ
ಮರಣವಿಲ್ಲದ್ಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿದಾನೋ
ಸುತ್ತು ಜನರನೆಲ್ಲಾ ಕರೆಸಿದಾ ಅಸುರ ತನ್ನ
ಸುತನ ಕೊಳಿಸಬೇಕು ಎನುತಲಿ
ಅಟ್ಟಡಿಗೆಯಲ್ಲಿ ವಿಷವ ಅಷ್ಟು ಭೋಜನಂಗಳ ಮಾಡಿ
ಅಷ್ಟು ವಿಷದ ಪದಾರ್ಥಗಳನ್ನು ಭುಂಜಿಸಿ ಕುಳಿತ ಗಟ್ಟಿಯಾಗಿ
ಬೆಟ್ಟವನ್ನು ಹತ್ತಿ ಉರುಳಿಸಿ ಅಸುರ ತನ್ನ
ಪಟ್ಟದಾನೆ ಕೈಲಿ ಮೆಟ್ಟಿಸಿ
ಹರಳುಮನೆಯ ಮಾಡಿ ಸುಟ್ಟು ಹುಲಿಯ ಬೋನಿನೊಳಗೆ ಇಟ್ಟು
ಯತನವಿಲ್ಲದೆ ಸುತನ ಕೊಳಿಸ ಶಕ್ತನಿಲ್ಲದೆ ಪೋದ
ನಿನ್ನ ಹರಿಯು ಇದ್ದ ಎಡೆಯಲಿ ಅಸುರ ತನ್ನ ಸುತನ
ಕರೆದು ತೋರಿಸೆಂದನು
ಎನ್ನ ಹರಿಯು ಇಲ್ಲದೆಡೆಯು ಇರುವುದುಂಟೆ ಲೋಕದಲ್ಲಿ
ಈ ಕಂಭದಲ್ಲಿ ಇಹನು ಎಂದು ಕೈಯ ಮುಗಿದು ತೋರಿದಾನು
ವಜ್ರ ಕಂಭವನ್ನು ಒದೆಯಲು ಹರಿಯು ತನ್ನ
ಉಗ್ರಕೋಪವನ್ನು ತಾಳಿದ
ಕಟಕಟೆಯ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ
ಕರಳು ಮಾಲೆಯನ್ನು ತೆಗೆದು ಕೊರಳು ಮಾಲೆ ಹಾಕಿದಾನು
ಅಂತರಿಕ್ಷದಲ್ಲಿ ಅಮರರು ನೋಡಿ ಆಗ
ಪುಷ್ಪವೃಷ್ಟಿಯನ್ನೆ ಕರೆದರು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತುಕೊಂಡು
ಅಮರಪತಿಯರೆಲ್ಲ ಕೂಡಿ ಅಂಜಬೇಡಿದರೆಂಭಯವಿತ್ತು
ಲಕ್ಷ್ಮೀನಾರಸಿಂಹ ಚರಿತ್ರೆಯಾ ಸ್ತುತಿಸಿದ ಹೇಳಿಕೇಳಿದ ಮನುಜರಿಗೆ
ಅಷ್ಟ ಭಾಗ್ಯಗಳನ್ನು ಕೊಟ್ಟು ಪುತ್ರಸಂತಾನ
ಭಕ್ತಿಯಿಂದಲೆ ಮುಕ್ತಿ ಕೊಡುವ
ಭಕ್ತವತ್ಸಲ ಪುರಂದರವಿಠ್ಠಲ
No comments:
Post a Comment