ಗೋಪಿ ಕೇಳ್ ನಿನ್ನ ಮಗ ಜಾರ ಅವಚೋರ ಸುಕುಮಾರ ।।
ಮುದದಿ ಮುಕುಂದ ಸದನಕ್ಕೆ ಬಂದ । ದಧಿಯ
ಮೀಸಲು ಬೆಣ್ಣೆ ತಿಂದ ಅವತಿಂದ ನಿನ್ನ ಕಂದಾ ।।
ಮಾರನ ಪಿತ ತಾ ಮನೆಯೊಳು ಹೊಕ್ಕ । ಹಿಡಿಯ
ಹೋದರೆ ಅವ ಸಿಕ್ಕ ಅವನಕ್ಕ ಭಾರಿ ಠಕ್ಕ ।।
ಹರೆಯದ ಪೋರಿ ಜರದ ಕೆಂಗೂರಿ । ಭರದಿಂದ
ಸೀರೆಯ ಸೆಳೆದ ಕರಪಿಡಿದ ಮಾನ ಕಳೆದಾ ।।
ಬಾಳದಿನವಾಯಿತು ಹೇಳುವುದ್ಹಾಂಗೆ । ಗೋಪಾಲನ
ಮನಸು ಒಮ್ಮೆ ಹಾಂಗೆ ಒಮ್ಮೆ ಹಿಂಗೆ । ಹೇಳಲ್ ಹಾಂಗೆ ।।
ರಾಧೆಯ ಮನದ ಮೋದ ಮುಕುಂದ । ಶ್ರೀದವಿಠ್ಠಲನಾಟ
ಚೆಂದ ನಯನನಂದ ನಿನ್ನ ಕಂದಾ ।।
ಮುದದಿ ಮುಕುಂದ ಸದನಕ್ಕೆ ಬಂದ । ದಧಿಯ
ಮೀಸಲು ಬೆಣ್ಣೆ ತಿಂದ ಅವತಿಂದ ನಿನ್ನ ಕಂದಾ ।।
ಮಾರನ ಪಿತ ತಾ ಮನೆಯೊಳು ಹೊಕ್ಕ । ಹಿಡಿಯ
ಹೋದರೆ ಅವ ಸಿಕ್ಕ ಅವನಕ್ಕ ಭಾರಿ ಠಕ್ಕ ।।
ಹರೆಯದ ಪೋರಿ ಜರದ ಕೆಂಗೂರಿ । ಭರದಿಂದ
ಸೀರೆಯ ಸೆಳೆದ ಕರಪಿಡಿದ ಮಾನ ಕಳೆದಾ ।।
ಬಾಳದಿನವಾಯಿತು ಹೇಳುವುದ್ಹಾಂಗೆ । ಗೋಪಾಲನ
ಮನಸು ಒಮ್ಮೆ ಹಾಂಗೆ ಒಮ್ಮೆ ಹಿಂಗೆ । ಹೇಳಲ್ ಹಾಂಗೆ ।।
ರಾಧೆಯ ಮನದ ಮೋದ ಮುಕುಂದ । ಶ್ರೀದವಿಠ್ಠಲನಾಟ
ಚೆಂದ ನಯನನಂದ ನಿನ್ನ ಕಂದಾ ।।
No comments:
Post a Comment