ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯದಹನ (ಪವನ)
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿಕೊಡು ಕವಿಜನ ಪ್ರಿಯಾ ।।
ಹೇಮಕಚ್ಚುಟು ಉಪವೀತಧರಿಪ ಮಾರುತ । ಕಾಮಾದಿವರ್ಗ ರಹಿತ ।
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ । ರಾಮಚಂದ್ರನ ನಿಜದೂತ
ಯಾಮಯಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಡಿಪುದು ।।
ವಜ್ರಶರೀರ ಗಂಭೀರ ಮುಕುಟಧರ । ದುರ್ಜನವನ ಕುಠಾರ ।।
ನಿರ್ಜರ ಮಣಿದಯಾ ಪರಾವಾರ ಉದಾರ ।
ಸಜ್ಜನರಘಪರಿಹಾರ ಅರ್ಜುನಗೊಲಿದೊಂದು ಧ್ವಜವಾನಿಸಿನಿಂದು ।
ಮೂರ್ಜಗವರಿವಂತೆ ಗರ್ಜನೆ ಮಾಡಿದಿ ।।
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ।
ಮಾರ್ಜನದಲಿ ಭವ ವರ್ಜಿತನೆನೆಸಿತೊ ।।
ಪ್ರಾಣ ಅಪಾನ ವ್ಯಾನೋದಾನ ಸಮಾನ । ಆನಂದ ಭಾರತೀರಮಣ ।।
ನೀನೇ ಸರ್ವಾದಿ ಗೀರ್ವಾಣದ್ಯರಿಗೆ ಜ್ಞಾನಧನಪಾಲಿಪವರೇಣ್ಯ ।
ನಾನು ನಿರುತದಲ್ಲಿ ಏನೆೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನು
ಪ್ರಾಣನಾಥ ಸಿರಿವಿಜಯವಿಠ್ಠಲನ ।। ಕಾಣಿಸಿ ಕೊಡುವುದು ಭಾನುಪ್ರಕಾಶ ।।
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿಕೊಡು ಕವಿಜನ ಪ್ರಿಯಾ ।।
ಹೇಮಕಚ್ಚುಟು ಉಪವೀತಧರಿಪ ಮಾರುತ । ಕಾಮಾದಿವರ್ಗ ರಹಿತ ।
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ । ರಾಮಚಂದ್ರನ ನಿಜದೂತ
ಯಾಮಯಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಡಿಪುದು ।।
ವಜ್ರಶರೀರ ಗಂಭೀರ ಮುಕುಟಧರ । ದುರ್ಜನವನ ಕುಠಾರ ।।
ನಿರ್ಜರ ಮಣಿದಯಾ ಪರಾವಾರ ಉದಾರ ।
ಸಜ್ಜನರಘಪರಿಹಾರ ಅರ್ಜುನಗೊಲಿದೊಂದು ಧ್ವಜವಾನಿಸಿನಿಂದು ।
ಮೂರ್ಜಗವರಿವಂತೆ ಗರ್ಜನೆ ಮಾಡಿದಿ ।।
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ।
ಮಾರ್ಜನದಲಿ ಭವ ವರ್ಜಿತನೆನೆಸಿತೊ ।।
ಪ್ರಾಣ ಅಪಾನ ವ್ಯಾನೋದಾನ ಸಮಾನ । ಆನಂದ ಭಾರತೀರಮಣ ।।
ನೀನೇ ಸರ್ವಾದಿ ಗೀರ್ವಾಣದ್ಯರಿಗೆ ಜ್ಞಾನಧನಪಾಲಿಪವರೇಣ್ಯ ।
ನಾನು ನಿರುತದಲ್ಲಿ ಏನೆೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನು
ಪ್ರಾಣನಾಥ ಸಿರಿವಿಜಯವಿಠ್ಠಲನ ।। ಕಾಣಿಸಿ ಕೊಡುವುದು ಭಾನುಪ್ರಕಾಶ ।।
No comments:
Post a Comment