ಏನಾ ಹೇಳಲೆ ತಂಗಿ ತಿಮ್ಮಯ್ಯನ ಪಾದವನು ಕಂಡೇ ।
ಕನಸ ಕಂಡೇನೆ ಮನದಲಿ ಕಳವಳಗೊಂಡೇನೆ
ಪೊನ್ನದ ಕಡಗವಿಟ್ಟು ತಿಮ್ಮಯತಾ । ಪೊಲ್ವನಾಮವ ನಿಟ್ಟು ।
ಅಂದುಕೆ ಘಲುಕೆನುತಾ
ಎನ್ನ ಮುಂದೆ ಬಂದು ನಿಂತಿಹನಲ್ಲೇ ।।
ಮಕರ ಕುಂಡಲವಿಟ್ಟು ತಿಮ್ಮಯ್ಯ ತಾ ಕಸ್ತೂರಿ
ತಿಲಕನಿಟ್ಟು । ಗೆಜ್ಜೆ ಘಲುಕೆನುತಾ ಸ್ವಾಮಿ
ತಾ ಬಂದು ನಿಂತಿಹನಲ್ಲೇ ।।
ಮುತ್ತಿನ ಪಲ್ಲಕ್ಕಿ ಯತಿಗಳು ಹೊತ್ತು ನಿಂತಿಹನಲ್ಲೇ
ಛತ್ರ ಚಾಮರದಿಂದಾ ರಂಗಯ್ಯನ ಉತ್ಸವ
ಮೂರುತಿಯ ।।
ತಾವರೆ ಕಮಲದಲ್ಲಿ ಕೃಷ್ಣಯ್ಯ ತಾ ಬಂದು ನಿಂತಿಹನಲ್ಲೆ
ವಾಯು ಬೊಮ್ಮದಿಗಳು ರಂಗಯ್ಯನ ಸೇವೆ
ಮಾಡುವರಲ್ಲೇ ।
ನವರತ್ನ ಕೆತ್ತಿಸಿದಾ ಸ್ವಾಮಿ ಎನ್ನ ಹೃದಯ ಮಂಟಪದಲ್ಲಿ
ಸರ್ವಾಭರಣದಿಂದ ಪುರಂದರ ವಿಠ್ಠಲನೆ ಕೂಡಿದನೆ ।।
ಕನಸ ಕಂಡೇನೆ ಮನದಲಿ ಕಳವಳಗೊಂಡೇನೆ
ಪೊನ್ನದ ಕಡಗವಿಟ್ಟು ತಿಮ್ಮಯತಾ । ಪೊಲ್ವನಾಮವ ನಿಟ್ಟು ।
ಅಂದುಕೆ ಘಲುಕೆನುತಾ
ಎನ್ನ ಮುಂದೆ ಬಂದು ನಿಂತಿಹನಲ್ಲೇ ।।
ಮಕರ ಕುಂಡಲವಿಟ್ಟು ತಿಮ್ಮಯ್ಯ ತಾ ಕಸ್ತೂರಿ
ತಿಲಕನಿಟ್ಟು । ಗೆಜ್ಜೆ ಘಲುಕೆನುತಾ ಸ್ವಾಮಿ
ತಾ ಬಂದು ನಿಂತಿಹನಲ್ಲೇ ।।
ಮುತ್ತಿನ ಪಲ್ಲಕ್ಕಿ ಯತಿಗಳು ಹೊತ್ತು ನಿಂತಿಹನಲ್ಲೇ
ಛತ್ರ ಚಾಮರದಿಂದಾ ರಂಗಯ್ಯನ ಉತ್ಸವ
ಮೂರುತಿಯ ।।
ತಾವರೆ ಕಮಲದಲ್ಲಿ ಕೃಷ್ಣಯ್ಯ ತಾ ಬಂದು ನಿಂತಿಹನಲ್ಲೆ
ವಾಯು ಬೊಮ್ಮದಿಗಳು ರಂಗಯ್ಯನ ಸೇವೆ
ಮಾಡುವರಲ್ಲೇ ।
ನವರತ್ನ ಕೆತ್ತಿಸಿದಾ ಸ್ವಾಮಿ ಎನ್ನ ಹೃದಯ ಮಂಟಪದಲ್ಲಿ
ಸರ್ವಾಭರಣದಿಂದ ಪುರಂದರ ವಿಠ್ಠಲನೆ ಕೂಡಿದನೆ ।।
No comments:
Post a Comment