ನಿನ್ನ ನಾನೇನೆಂದೆನೋ ರಂಗಯ್ಯ ರಂಗ
ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ
ಪನ್ನಂಗ ಶಯನ ಪಾಲ್ಗಡಲೊಡೆಯನೆ ರಂಗ ।।
ಧೀರ ಸೋಮಕ ವೇದ ಚೋರ ಖಳನ ಸೀಳಿ ।
ವಾರಿಧಿಗಿಳಿದು ಪರ್ವತವಾನೆತ್ತಿ ।
ಧಾರುಣಿಯನು ಕದ್ದ ದನುಜದಲ್ಲಣ ನಾದ
ನಾರಸಿಂಹ ನಮೋ ನಮೋ ಎಂಬೆ ನಲ್ಲದೆ
ನೀರಪೊಕ್ಕವನೆಂದೆನೇ ಬೆನ್ನಿನಮೇಲೆ
ಭಾರ ಪೊಕ್ಕವನೆಂದೆನೇ ಮಣ್ಣನು ಬಗೆದು
ಏರವೆದ್ದವನೆಂದೆನೇ ರಕ್ಕಸನೊಳು
ಹೋರಿ ಹೊಯ್ದವನೆಂದು ಹೊಗಳೀದನಲ್ಲವೇ ।।
ಧರೆಯ ದಾನವ ಬೇಡಿ ಧರಣೀ ಈರಡಿಮಾಡಿ ।
ಪರಶು ಪಿಡಿದು ಕ್ಷತ್ರಿಯರಾಕಾಡಿ
ಚರಣದಿ ಪಾಶಾಣ ಪೆಣ್ಣು ಮಾಡಿದ ಪುಣ್ಯ
ಚರಿತಾಯದವಪತಿ ಶರಣೆಂದೆ ನಲ್ಲದೆ
ತಿರುಕಹಾರವನೆಂದೆನೇ ಹೆತ್ತ ತಾಯ
ಕರುಳ ಕೊಯ್ದವ ನೆಂದೆನೇ ವನವಾಸಾದಿ
ಉರುಕನೆರೆದವನೆಂದೆನೇ ಪೂತಣಿಯನು
ಸರಕುಮಾಡದೆ ಕೊಂದ ಹರಿ ಎಂದೇ ನಲ್ಲದೆ ।।
ಚಿತ್ತದಿ ಕೋಟಿ ಲಾವಣ್ಯ ತೇಜದಿ ಬಂದು
ಉತ್ತಮ ಸ್ತ್ರೀಯರ ವ್ರತವಳಿದು
ಮತ್ತೆ ಕಲ್ಕಿಯಾಗಿ ಮಧುಕರ ಮಡುಹಿದ
ಹತ್ತಾವತಾರದ ಹೆಡೆಯಂದೆ ನಲ್ಲವೇ
ಬತ್ತಲಿದ್ದವನೆಂದೆನೇ ತೇಜಿಯನೇರಿ
ಬತ್ತಿ ಆದವನೆಂದೆನೇ ಬಾರಿಬಾರಿಗೂ
ಮತ್ತೆ ಪುಟ್ಟಿದನೆಂದೆನೇ ಆದಿಕೇಶವ
ಭಕ್ತವತ್ಸಲನೆಂದು ಹೊಗಳೀದನಲ್ಲದೆ ।।
ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ
ಪನ್ನಂಗ ಶಯನ ಪಾಲ್ಗಡಲೊಡೆಯನೆ ರಂಗ ।।
ಧೀರ ಸೋಮಕ ವೇದ ಚೋರ ಖಳನ ಸೀಳಿ ।
ವಾರಿಧಿಗಿಳಿದು ಪರ್ವತವಾನೆತ್ತಿ ।
ಧಾರುಣಿಯನು ಕದ್ದ ದನುಜದಲ್ಲಣ ನಾದ
ನಾರಸಿಂಹ ನಮೋ ನಮೋ ಎಂಬೆ ನಲ್ಲದೆ
ನೀರಪೊಕ್ಕವನೆಂದೆನೇ ಬೆನ್ನಿನಮೇಲೆ
ಭಾರ ಪೊಕ್ಕವನೆಂದೆನೇ ಮಣ್ಣನು ಬಗೆದು
ಏರವೆದ್ದವನೆಂದೆನೇ ರಕ್ಕಸನೊಳು
ಹೋರಿ ಹೊಯ್ದವನೆಂದು ಹೊಗಳೀದನಲ್ಲವೇ ।।
ಧರೆಯ ದಾನವ ಬೇಡಿ ಧರಣೀ ಈರಡಿಮಾಡಿ ।
ಪರಶು ಪಿಡಿದು ಕ್ಷತ್ರಿಯರಾಕಾಡಿ
ಚರಣದಿ ಪಾಶಾಣ ಪೆಣ್ಣು ಮಾಡಿದ ಪುಣ್ಯ
ಚರಿತಾಯದವಪತಿ ಶರಣೆಂದೆ ನಲ್ಲದೆ
ತಿರುಕಹಾರವನೆಂದೆನೇ ಹೆತ್ತ ತಾಯ
ಕರುಳ ಕೊಯ್ದವ ನೆಂದೆನೇ ವನವಾಸಾದಿ
ಉರುಕನೆರೆದವನೆಂದೆನೇ ಪೂತಣಿಯನು
ಸರಕುಮಾಡದೆ ಕೊಂದ ಹರಿ ಎಂದೇ ನಲ್ಲದೆ ।।
ಚಿತ್ತದಿ ಕೋಟಿ ಲಾವಣ್ಯ ತೇಜದಿ ಬಂದು
ಉತ್ತಮ ಸ್ತ್ರೀಯರ ವ್ರತವಳಿದು
ಮತ್ತೆ ಕಲ್ಕಿಯಾಗಿ ಮಧುಕರ ಮಡುಹಿದ
ಹತ್ತಾವತಾರದ ಹೆಡೆಯಂದೆ ನಲ್ಲವೇ
ಬತ್ತಲಿದ್ದವನೆಂದೆನೇ ತೇಜಿಯನೇರಿ
ಬತ್ತಿ ಆದವನೆಂದೆನೇ ಬಾರಿಬಾರಿಗೂ
ಮತ್ತೆ ಪುಟ್ಟಿದನೆಂದೆನೇ ಆದಿಕೇಶವ
ಭಕ್ತವತ್ಸಲನೆಂದು ಹೊಗಳೀದನಲ್ಲದೆ ।।
No comments:
Post a Comment