ಬೃಂದಾವನದಿ ಕೊಳಲೂದಲಿಲ್ಲವೇ
ಅಂದು ಗೋಪಿಯರನ್ನು ಕರೆಯಲಿಲ್ಲವೇ ।
ಇಂದೇಕೆ ಮರೆತೆಯೋ ಮಾಧವ ರಾಧ ಮಾಧವ ವೇಣಿ ಮಾಧವ
ಬಂದು ನೀ ಎನ್ನ ಕಾಯೋ ಕೇಶವ ।। ಪ ।।
ನೀರೋಳು ನೀ ಆಟ ಆಡಲಿಲ್ಲವೇ (ನೀ)
ಭಾರವ ಬೆನ್ನೊಳು ಹೊರಲಿಲ್ಲವೇ ।
ಕೊರೆಯುತ ಮಸೆಯುತ ತಿರುಗಲಿಲ್ಲವೇ (ನೀ)
ಪೋರನ ಮಾತಿಗೆ ಪೊಗಲಿಲ್ಲವೇ ।। (ಕೃಷ್ಣ)
ಪೊಡವೀಯ ದಾನವ ಬೇಡಲಿಲ್ಲವೇ (ನೀ)
ಬಡವ ಬ್ರಾಹ್ಮಣನಾಗಿ ತಿರುಗಲಿಲ್ಲವೇ ।
ಮಡದೀಯ ಕಟ್ಟಿಕೊಂಡು ಹೋಗಲಿಲ್ಲವೇ (ನೀ)
ಕಡಗೋಲ ಕೈಯಲ್ಲಿ ಹಿಡಿಯಲಿಲ್ಲವೇ ।। (ಕೃಷ್ಣ)
ಬತ್ತಲೆ ಬೌದನಾಗಿ ತಿರುಗಲಿಲ್ಲವೇ (ನೀ)
ಉತ್ತಮ ತೇಜಿಯನೇರಲಿಲ್ಲವೆ ।
ಹತ್ತವತಾರವ ತೋರಲಿಲ್ಲವೇ (ನೀ)
ಮತ್ತೆ ಶ್ರೀ ಪುರಂದರ ವಿಠ್ಠಲನಲ್ಲವೆ ।। (ಕೃಷ್ಣ)
ಅಂದು ಗೋಪಿಯರನ್ನು ಕರೆಯಲಿಲ್ಲವೇ ।
ಇಂದೇಕೆ ಮರೆತೆಯೋ ಮಾಧವ ರಾಧ ಮಾಧವ ವೇಣಿ ಮಾಧವ
ಬಂದು ನೀ ಎನ್ನ ಕಾಯೋ ಕೇಶವ ।। ಪ ।।
ನೀರೋಳು ನೀ ಆಟ ಆಡಲಿಲ್ಲವೇ (ನೀ)
ಭಾರವ ಬೆನ್ನೊಳು ಹೊರಲಿಲ್ಲವೇ ।
ಕೊರೆಯುತ ಮಸೆಯುತ ತಿರುಗಲಿಲ್ಲವೇ (ನೀ)
ಪೋರನ ಮಾತಿಗೆ ಪೊಗಲಿಲ್ಲವೇ ।। (ಕೃಷ್ಣ)
ಪೊಡವೀಯ ದಾನವ ಬೇಡಲಿಲ್ಲವೇ (ನೀ)
ಬಡವ ಬ್ರಾಹ್ಮಣನಾಗಿ ತಿರುಗಲಿಲ್ಲವೇ ।
ಮಡದೀಯ ಕಟ್ಟಿಕೊಂಡು ಹೋಗಲಿಲ್ಲವೇ (ನೀ)
ಕಡಗೋಲ ಕೈಯಲ್ಲಿ ಹಿಡಿಯಲಿಲ್ಲವೇ ।। (ಕೃಷ್ಣ)
ಬತ್ತಲೆ ಬೌದನಾಗಿ ತಿರುಗಲಿಲ್ಲವೇ (ನೀ)
ಉತ್ತಮ ತೇಜಿಯನೇರಲಿಲ್ಲವೆ ।
ಹತ್ತವತಾರವ ತೋರಲಿಲ್ಲವೇ (ನೀ)
ಮತ್ತೆ ಶ್ರೀ ಪುರಂದರ ವಿಠ್ಠಲನಲ್ಲವೆ ।। (ಕೃಷ್ಣ)
No comments:
Post a Comment