Tuesday, 29 October 2019

ಗೋವಿಂದ ಹರಿ ಗೋವಿಂದಾ

ಗೋವಿಂದ ಹರಿ ಗೋವಿಂದಾ ।
ಕೇಶವ ಕೃಷ್ಣ ಜನಾರ್ಧನ ।।

ಮತ್ಸ್ಯಾವತಾರದೊಳಾಡಿದನೆ । ಮಂದರಾಂಚಲ
ಬೆನ್ನೊಳಗಾ೦ದವನೆ  । ಅಚ್ಚ ಸೂಕರನಾಗಿ
ಬಾಳಿದನೆ । ಮದ ಹೆಜ್ಜೆ ಹಿರಣ್ಯಕನ ಸೀಳಿದನೆ ।। ಪ ।।

ಬಲಿಯೊಳು ದಾನವ ಬೇಡಿದನೆ । ಶಾಸ್ತ್ರ ಕುಲವ
ನಿರ್ಮೂಲನ ಮಾಡಿದನೆ । ಜಲನಿಧಿಗೆ ಬಿಲ್ಲ ಹೂಡಿದನೆ ।
ಕಾಮಗೊಲಿದು ಗೊಲ್ಲತಿ ಯೊಳಗಾಡಿದನೆ ।। ಪ ।।

ಸಾಧಿಸಿ ತ್ರಿಪುರವ ಗೆಲಿದವನೆ । ಬಲು ವಾದಿಸಿ
ಹಯವೇರಿ ಮೆರೆದವನೆ । ಭೇದದಿ ವಿಶ್ವವ ಗೆಲಿದವನೆ ।
ಬಡದಾದಿ ಕೇಶವ ನಾಮಗೊಲಿದವನೆ ।।

No comments:

Post a Comment