ಬೊಮ್ಮಘಟ್ಟರಾಯ ಪಾಲಿಸೋ ನಮ್ಮ ನೀ ಮಹರಾಯ
ಧರ್ಮಾಧ್ಯ ಕಾಮಾರ್ಥ ಕೊಡುವೋ ಕರುಣಾ೦ಬುದಿ ।
ಸುಗ್ರೀವಗೆ ನೀ ವಲಿದ್ವಾಲಿಯನು
ನಿಗ್ರಹ ಮಾಡುತ ಪರಮಾಗ್ರಹದಲಿ ।
ಶೀಘ್ರದಿಂದಲಿ ದಶಗ್ರೀವನ ಲಂಕೆ
ದುರ್ಗದಲ್ಯಾಡಿ ಧಗ್ನಿಯ ಒಡಗೂಡಿ ।। ಪ ।।
ರಾಮಪದಾಂಬುಜ ಸೇವಕ ಸೇತುವೆ
ಪ್ರೇಮದಿ ಕಟ್ಟಿ ನಿಂತನು ರಣದಿ ।
ನೇಮದಿಂದಲಿ ಸಂಜೀವನ ತಂದಾತ
ವಾಹನನಾದ ತ್ರಿಧಾಮದೊಡೆಯಗೆ ।। ಪ ।।
ವಾತಾತ್ಮಜ ರಘುನಾಥಗೆ ನೀನಿಜ
ಧೂತ ನೆನೆಸಿ ಬಹು ಪ್ರೀತಿಯಿಂದಲಿ ।
ಭೂತಳದೊಳು ಪ್ರಖ್ಯಾತಿಯ ಪಡೆದ
ನಿರ್ಭೀತನಾದ ಭೀಮೇಶ ಕೃಷ್ಣನ ।। (ಪ್ರೀಯ)
ಧರ್ಮಾಧ್ಯ ಕಾಮಾರ್ಥ ಕೊಡುವೋ ಕರುಣಾ೦ಬುದಿ ।
ಸುಗ್ರೀವಗೆ ನೀ ವಲಿದ್ವಾಲಿಯನು
ನಿಗ್ರಹ ಮಾಡುತ ಪರಮಾಗ್ರಹದಲಿ ।
ಶೀಘ್ರದಿಂದಲಿ ದಶಗ್ರೀವನ ಲಂಕೆ
ದುರ್ಗದಲ್ಯಾಡಿ ಧಗ್ನಿಯ ಒಡಗೂಡಿ ।। ಪ ।।
ರಾಮಪದಾಂಬುಜ ಸೇವಕ ಸೇತುವೆ
ಪ್ರೇಮದಿ ಕಟ್ಟಿ ನಿಂತನು ರಣದಿ ।
ನೇಮದಿಂದಲಿ ಸಂಜೀವನ ತಂದಾತ
ವಾಹನನಾದ ತ್ರಿಧಾಮದೊಡೆಯಗೆ ।। ಪ ।।
ವಾತಾತ್ಮಜ ರಘುನಾಥಗೆ ನೀನಿಜ
ಧೂತ ನೆನೆಸಿ ಬಹು ಪ್ರೀತಿಯಿಂದಲಿ ।
ಭೂತಳದೊಳು ಪ್ರಖ್ಯಾತಿಯ ಪಡೆದ
ನಿರ್ಭೀತನಾದ ಭೀಮೇಶ ಕೃಷ್ಣನ ।। (ಪ್ರೀಯ)
No comments:
Post a Comment