ಪಾಲಿಸೆ ಎನ್ನನು ಗೌರಿ ।।ಪ।।
ಪಾಲಿಸೆ ನಿನ್ನಯ ಪಾಲಿಗೆ ಬಂದೆನು ।
ಬೀಳುವೆ ಸರ್ವದ ಕಾಲಿಗೆ ಕರುಣದಿ ।।
ಶರಣೆಂದವರನು ಪೊರೆವಳುಎಂಬುವ ।
ಬಿರುದು ನಿನ್ನದು ಎಂದು ಅರಿತೆನು ಕರುಣದಿ ।।
ಸನ್ಮತ ಪುರುಷನ ಇನ್ನೆಲ್ಲಿ ಕಾಣೆನು ।
ಮನ್ಮಥ ನೆಂಬುವ ಬನ್ನ ಬಡಿಪ ಬಲು ।।
ಕಾಣೆನು ಶಾಂತಿಯ ಏನೆಂದು ಹೇಳಲಿ ।
ಪ್ರಾಣೇಶ ವಿಠ್ಠಲನು ತಾನೆ ಬಲ್ಲನು ತಾಯೇ ।।
ಪಾಲಿಸೆ ನಿನ್ನಯ ಪಾಲಿಗೆ ಬಂದೆನು ।
ಬೀಳುವೆ ಸರ್ವದ ಕಾಲಿಗೆ ಕರುಣದಿ ।।
ಶರಣೆಂದವರನು ಪೊರೆವಳುಎಂಬುವ ।
ಬಿರುದು ನಿನ್ನದು ಎಂದು ಅರಿತೆನು ಕರುಣದಿ ।।
ಸನ್ಮತ ಪುರುಷನ ಇನ್ನೆಲ್ಲಿ ಕಾಣೆನು ।
ಮನ್ಮಥ ನೆಂಬುವ ಬನ್ನ ಬಡಿಪ ಬಲು ।।
ಕಾಣೆನು ಶಾಂತಿಯ ಏನೆಂದು ಹೇಳಲಿ ।
ಪ್ರಾಣೇಶ ವಿಠ್ಠಲನು ತಾನೆ ಬಲ್ಲನು ತಾಯೇ ।।
No comments:
Post a Comment