ರಾಘವೇಂದ್ರ ಗುರು ರಾಯರ ಸೇವಿಸಿರೋ । ಸೌಖ್ಯದಿ ಜೀವಿಸಿರೋ
ತುಂಗಾ ತೀರದಿ ರಘುರಾಮನ ಪೂಜಿಪರೋ । ನರಸಿಂಗನ ಭಜಕರೋ
ಶ್ರೀಸುಧೀಂದ್ರಕರ ಸರೋಜ ಸಂಜಾತ । ಜಗದೊಳಗೆ ಪುನೀತ
ದಾಶರಥಿಯ ದಾಸತ್ವವ ತಾನ್ವಹಿಸಿ ದುರ್ಮತವನು ಜೈಸಿ
ಈ ಸಮೀರ ಮತ ಸಂಸ್ಥಾಪಕರಾಗಿ ನಿಂದಕರನು ನೀಗಿ
ಭೂಸುರರಿಗೆ ಸಂಸೇವ್ಯ ಸದಾಚರಣೀ ಕಂಗೊಳಿಸುವ ಕರುಣೀ ।।
ಕು೦ದದ ವರಮಂತ್ರಾಲಯದಲ್ಲಿರುವ । ಕರೆದಲ್ಲಿಗೆ ಬರುವ
ವೃಂದಾವನ ಗತ ಮೃತ್ತಿಗೆ ಜಲಪಾನಾ । ಮುಕ್ತಿಗೆ ಸೋಪಾನ
ಸಂದರುಶನ ಮಾತ್ರದಲ್ಲಿ ಮಹತ್ಪಾಪ ಪರಿದೋಡಿಸಲಾಪ
ಮಂದಭಾಗ್ಯರಿಗೆ ದೊರಕದಿರುವ ಸೇವಾ ಶರಣರ ಸಂಜೀವಾ ।।
ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸುವ ಮಾತ್ರ
ಮೋದ ಬಡಿಸುತಿಹ ತಾನಿಹ ಪರದಲ್ಲಿ ಈತಗೆ ಸರಿ ಎಲ್ಲಿ
ಮೇದಿನಿಯೊಳಗಿನ್ನರಸಲು ನಾ ಕಾಣೆ ಪುಸಿ ಯೆಲ್ಲೆನ್ನಾಣೆ
ಪಾದಸ್ಮರಣೆಯ ಮಾಡದವನೇ ಪಾಪಿ ನಾ ಪೇಳ್ವೆನು ಸ್ಥಾಪಿ ।।
ತುಂಗಾ ತೀರದಿ ರಘುರಾಮನ ಪೂಜಿಪರೋ । ನರಸಿಂಗನ ಭಜಕರೋ
ಶ್ರೀಸುಧೀಂದ್ರಕರ ಸರೋಜ ಸಂಜಾತ । ಜಗದೊಳಗೆ ಪುನೀತ
ದಾಶರಥಿಯ ದಾಸತ್ವವ ತಾನ್ವಹಿಸಿ ದುರ್ಮತವನು ಜೈಸಿ
ಈ ಸಮೀರ ಮತ ಸಂಸ್ಥಾಪಕರಾಗಿ ನಿಂದಕರನು ನೀಗಿ
ಭೂಸುರರಿಗೆ ಸಂಸೇವ್ಯ ಸದಾಚರಣೀ ಕಂಗೊಳಿಸುವ ಕರುಣೀ ।।
ಕು೦ದದ ವರಮಂತ್ರಾಲಯದಲ್ಲಿರುವ । ಕರೆದಲ್ಲಿಗೆ ಬರುವ
ವೃಂದಾವನ ಗತ ಮೃತ್ತಿಗೆ ಜಲಪಾನಾ । ಮುಕ್ತಿಗೆ ಸೋಪಾನ
ಸಂದರುಶನ ಮಾತ್ರದಲ್ಲಿ ಮಹತ್ಪಾಪ ಪರಿದೋಡಿಸಲಾಪ
ಮಂದಭಾಗ್ಯರಿಗೆ ದೊರಕದಿರುವ ಸೇವಾ ಶರಣರ ಸಂಜೀವಾ ।।
ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸುವ ಮಾತ್ರ
ಮೋದ ಬಡಿಸುತಿಹ ತಾನಿಹ ಪರದಲ್ಲಿ ಈತಗೆ ಸರಿ ಎಲ್ಲಿ
ಮೇದಿನಿಯೊಳಗಿನ್ನರಸಲು ನಾ ಕಾಣೆ ಪುಸಿ ಯೆಲ್ಲೆನ್ನಾಣೆ
ಪಾದಸ್ಮರಣೆಯ ಮಾಡದವನೇ ಪಾಪಿ ನಾ ಪೇಳ್ವೆನು ಸ್ಥಾಪಿ ।।
No comments:
Post a Comment