ಮೂರು ನಾಮಗಳ ಧರಿಸಿದ ಕಾರಣವೇನು
ಸಾರಿ ಪೇಳೆಲೊ ಈಗಲೆ ।।
ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ
ಯಾರು ಇಟ್ಟರು ನಿನಗೆ ಮೂರು ನಾಮಗಳ ।।
ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು
ಶುದ್ಧ ಪಾದಕೆ ಎರಗಿ ಕರವ ಮುಗಿದು
ಎದ್ದು ನೋಡಲು ನಿನ್ನ ಪಣಿಯೋಳಿಪರಿ ಇರಲು
ಮಧ್ವಮತದ ದೈವವೆಂದು ನಿನ್ನ ಕರೆಯುವರೆ ।।
ಸಾಲದೆ ನಿನ್ನ ಸೌಂದರ್ಯಕ್ಕೊಂದು ತಿಲಕ
ಪಾಲಸಾಗರ ಶಾಯಿ ಚೆಲುವಮೂರ್ತಿ
ಕಾಲಕಾಲಕೆ ಬರುವ ಭಕುತಜನಗಳ ವೃಂದ
ದೃಷ್ಟಿತಾಕುವುದೆಂಬ ತೋರುವ ಬಗೆಯೂ ।।
ಮೂರು ಲೋಕಗಳಿಹವು ಮೂರುರೂಪನು ನಾನು
ಮೂರು ಮಾಳ್ಪೆನು ಜಗವ ಮೂರು ಗುಣದಿ
ಮೂರು ತಾಪವ ಗೆದ್ದು ಮಾರ್ಗದಿ ಭಜಿಪೆ
ಪಾರು ಮಾಡುವೆನೆಂದು ತೋರುವ ಬಗೆಯೂ ।।
ಮೂರೆರಡು ಎರಡೆರಡು ಇಂದ್ರಿಯ ವರ್ಜಿಸಲು
ತೋರುವನು ನಿಜರೂಪ ಭಕ್ತಗೆಂದು
ಸಾರುತಿದ್ದರು ವಾಯು ಅರಿಯದೆ ಭಜಿಸಿದಗೆ
ಮೂರುನಾಮಗಳೆ ಗತಿ ಎನ್ನುವ ಬಗೆಯೂ ।।
ಶ್ರೀಲೋಲಕೃಷ್ಣ ಗೋಪಾಲವಿಠಲ ನಿನ್ನ
ಈ ಬಗೆಯ ಲೀಲೆಗಳ ಅರಿವರ್ಯಾರೋ
ವ್ಯಾಳಶಯನ ವೆಂಕಟೇಶ ಎನ್ನ ಮನಕೆ
ಕಾಲಕಾಲಕೆ ನಿನ್ನ ಲೀಲೆಗಳ ತೋರೊ ।।
ಸಾರಿ ಪೇಳೆಲೊ ಈಗಲೆ ।।
ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ
ಯಾರು ಇಟ್ಟರು ನಿನಗೆ ಮೂರು ನಾಮಗಳ ।।
ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು
ಶುದ್ಧ ಪಾದಕೆ ಎರಗಿ ಕರವ ಮುಗಿದು
ಎದ್ದು ನೋಡಲು ನಿನ್ನ ಪಣಿಯೋಳಿಪರಿ ಇರಲು
ಮಧ್ವಮತದ ದೈವವೆಂದು ನಿನ್ನ ಕರೆಯುವರೆ ।।
ಸಾಲದೆ ನಿನ್ನ ಸೌಂದರ್ಯಕ್ಕೊಂದು ತಿಲಕ
ಪಾಲಸಾಗರ ಶಾಯಿ ಚೆಲುವಮೂರ್ತಿ
ಕಾಲಕಾಲಕೆ ಬರುವ ಭಕುತಜನಗಳ ವೃಂದ
ದೃಷ್ಟಿತಾಕುವುದೆಂಬ ತೋರುವ ಬಗೆಯೂ ।।
ಮೂರು ಲೋಕಗಳಿಹವು ಮೂರುರೂಪನು ನಾನು
ಮೂರು ಮಾಳ್ಪೆನು ಜಗವ ಮೂರು ಗುಣದಿ
ಮೂರು ತಾಪವ ಗೆದ್ದು ಮಾರ್ಗದಿ ಭಜಿಪೆ
ಪಾರು ಮಾಡುವೆನೆಂದು ತೋರುವ ಬಗೆಯೂ ।।
ಮೂರೆರಡು ಎರಡೆರಡು ಇಂದ್ರಿಯ ವರ್ಜಿಸಲು
ತೋರುವನು ನಿಜರೂಪ ಭಕ್ತಗೆಂದು
ಸಾರುತಿದ್ದರು ವಾಯು ಅರಿಯದೆ ಭಜಿಸಿದಗೆ
ಮೂರುನಾಮಗಳೆ ಗತಿ ಎನ್ನುವ ಬಗೆಯೂ ।।
ಶ್ರೀಲೋಲಕೃಷ್ಣ ಗೋಪಾಲವಿಠಲ ನಿನ್ನ
ಈ ಬಗೆಯ ಲೀಲೆಗಳ ಅರಿವರ್ಯಾರೋ
ವ್ಯಾಳಶಯನ ವೆಂಕಟೇಶ ಎನ್ನ ಮನಕೆ
ಕಾಲಕಾಲಕೆ ನಿನ್ನ ಲೀಲೆಗಳ ತೋರೊ ।।
No comments:
Post a Comment