ಶ್ರೀನಿವಾಸ ನೀನೆ ಪಾಲಿಸೋ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೆ ।।
ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ ।।
ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ (ನೀ) ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದೊಳಗೆ
ದುಷ್ಟಕಾರ್ಯ ಮಾಡಿದಾಗ್ಯೂ ಶಿಷ್ಠನಾಗಿ ಕೈಯಪಿಡಿದು ।।
ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸಖ
ಎಂದಿಗೆ ಲಭ್ಯವೋ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತ್ತಿಹೆನು
ಚಂದದಿಂ ಭವಾಬ್ಧಿಗೆಂದು ಬೆಂದು ನೊಂದೆನೋ ಮುಕುಂದ ।।
ಅನುದಿನ ಅನೇಕ ರೋಗಗಳ ಅನುಭವಿಸುವೆನು
ಘನ್ನ ಮಹಿಮ ನೀನೆ ಬಲ್ಲೆಯಾ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠ್ಠಲ ನೀ ಎನಗೆ ಒಲಿದು ।।
ಗಾನಲೋಲ ಶ್ರೀ ಮುಕುಂದನೆ ।।
ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ ।।
ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ (ನೀ) ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದೊಳಗೆ
ದುಷ್ಟಕಾರ್ಯ ಮಾಡಿದಾಗ್ಯೂ ಶಿಷ್ಠನಾಗಿ ಕೈಯಪಿಡಿದು ।।
ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸಖ
ಎಂದಿಗೆ ಲಭ್ಯವೋ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತ್ತಿಹೆನು
ಚಂದದಿಂ ಭವಾಬ್ಧಿಗೆಂದು ಬೆಂದು ನೊಂದೆನೋ ಮುಕುಂದ ।।
ಅನುದಿನ ಅನೇಕ ರೋಗಗಳ ಅನುಭವಿಸುವೆನು
ಘನ್ನ ಮಹಿಮ ನೀನೆ ಬಲ್ಲೆಯಾ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠ್ಠಲ ನೀ ಎನಗೆ ಒಲಿದು ।।
No comments:
Post a Comment